Thursday, September 22, 2011

ಪಂಡಿತ್ ದಿನಕರ್ ಕೈಕಿಣಿ


ಅತ್ಯುತ್ತಮ ರಚನಾಕಾರರೂ, ಅಪೂರ್ವ ಗಾಯಕರೂ ಆಗಿದ್ದ ಪಂಡಿತ್ ದಿನಕರ್ ಕೈಕಿಣಿ ಅವರ ೭೫ ನೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಟವಾಗಿದ್ದ ಲೇಖನ ಇದು. ನನ್ನ ಮಕ್ಕಳಿಬ್ಬರ ಸಂಗೀತ ಗುರು ಶ್ರೀಮತಿ ಅದಿತಿ ಉಪಾಧ್ಯ ಅವರ ತಂದೆ ಹಾಗೂ ಗುರು ಇವರು. ಇದರಿಂದಾಗಿ ಅವರನ್ನು ಭೇಟಿಯಾಗುವ ಸುಸಂದರ್ಭವೂ ನಮಗೆ ಒದಗಿತ್ತು. ಅವರ ಸಂಗೀತವನ್ನು ಕೇಳುವುದು ಯಾರಿಗೇ ಆಗಲಿ ಒಂದು ಅದ್ಭುತ ಅನುಭವ.

ಕಳೆದ ವರ್ಷ, ಅಂದರೆ ೨೦೧೦ ರ ಜನವರಿಯಲ್ಲಿ ಅವರು ನಿಧನರಾದರು. ಇವರ ಮಕ್ಕಳು ಇವರ ಹೆಸರಿನಲ್ಲಿ `ಸ್ವರಿತ್' ಎಂಬ ಒಂದು ಟ್ರಸ್ಟ್ ಅನ್ನು ಪ್ರಾರಂಭಿಸಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಅವರ ೮೦ನೆಯ ಹುಟ್ಟು ಹಬ್ಬದ ಪ್ರಯುಕ್ತ ಅವರ ಬಗ್ಗೆ ಒಂದು documentary ಚಿತ್ರವನ್ನು ಸ್ವರಿತ್ , ಮುಂಬೈನಲ್ಲಿ ಬಿಡುಗಡೆ ಮಾಡಲಿದೆ. ಅವರ ಸಂಗೀತವನ್ನು ಸಿಡಿ ರೂಪದಲ್ಲಿ ಹೊರತರುವ ಯೋಜನೆ ಸಹ ಹಾಕಿಕೊಂಡಿದೆ.

No comments: